ಗೋಕಲ್ಲು

ಮೇಯಾಕ ಹ್ವಾದ ದನಕರುಗಳ ಹಿಂಡು
ಸಂಜೆಯಾಗತ್ಲು ಊರೊಳಗ ಬರಾಕ್ಕೊಲ್ದು
ಕೊರಳೆತ್ತಿ ಬಾಯ್ತೆರೆದು ಬಾಲವ ಸೆಟೆಸಿ
ಹುಗಿದು ನಿಲ್ಲಿಸಿದ್ದ ಊರ ಹೊರಗಿನ ಇತಿಹಾಸವಿದ್ದ
ಈ ಕಲ್ಲಿಗೆ ಉಜ್ಯಾವ ಅರೆತೆರದ ಕಣ್ಣಿನಾಗ
ತಮ್ಮ ಮೈ ನವೆ ನೀಗಿಸಿಕೊಳ್ತಾ
ಆನಂದದ ಪರಮಾವಧಿಯೊಳಗ ತೇಲ್ಯಾವ

ಪವಿತ್ರ ಗೋವಿನ ಅಂಗಾಂಗದೊಳಗಿಡಗಿದ್ದ
ಮುಕ್ಕೋಟಿ ದ್ಯಾವರುಗಳೆಲ್ಲಾ ಮುಟ್ಟಿದ
ಈ ಕಲ್ಲು ಪವಿತ್ರವಾಗೈತಿ
ದನಕರುಗಳೆಲ್ಲಾ ಸಂದಾಗಿದ್ರ
ರೈತನಿಗೆ ಸುಖ ನೆಮ್ಮದಿ

ಅದ್ರಾಗ ಮಡಗೈತಿ ಊರಿನ ಹಿತ
ನೂರಾರು ವರುಷಗಳಿಂದ ಸವೆದು ಸವೆದು ನುಣುಪಾಗೈತಿ
ಅದಕ್ಕ ಗೋಕಲ್ಲು ಎಂದು ಭಕ್ತಿಯೊಳಗ
ಪೂಜಿ ಸಲ್ಲಿಸ್ತಾರ ಊರಿನ ಜನ
*****
೦೬-೦೫-೨೦೦೭ ರ ಸಂಯುಕ್ತ ಕರ್ನಾಟಕ : ಸಾಪ್ತಾಹಿಕ ಸೌರಭದಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಗ್ರಹಕಥಾ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys